Thursday, August 7, 2014

ಕನಸಿನ ಹುಡುಗಿ -ಸಿಂಚನಾ ::ಭಾಗ-೨ (ಮಣಿಪಾಲದಿಂದ ಪಿರಂಜೆಯ ತನಕ)

ಅಂತು ಬಸ್ಸು ಏರಿದೆ. ಬಸ್ಸಿನ ಸಹಾಯಕ ದುಂಬ ಪೋಲೇ(ತುಳು:ಮುಂದೆ ಹೋಗು) ,ಮಿಥ್ ಪೋಲೆ (ತುಳು:ಮೇಲೆ ಹೋಗು) ಅನ್ನುತ್ತಲಿದ್ದ. ಮುಂದಿನ ಬಾಗಿಲ ಹತ್ತಿರದ ಎಡಭಾಗದ ಸೀಟ್ ನಲ್ಲಿ ಕುಳಿತು ಕೊಂಡೆ.

ಅದು HMT ಬಸ್ಸು. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಸರ್ಕಾರಿ ಬಸ್ಸು ವ್ಯವಸ್ಥೆಯಿಲ್ಲ. ಆದರು ಈಗ ಮಂಗಳೂರು ಹಾಗೂ ಮಣಿಪಾಲದ ನಡುವೆ ಕೆಲವು ಸರ್ಕಾರಿ ವೋಲ್ವೋ ಬಸ್ಸುಗಳ ಓಡಾಟ ಇದೆ. ಈ ಬಸ್ಸುಗಳ ವಿಶೇಷ ಅಂದರೆ ಪರಿ ಪೂರ್ಣವಾಗಿ ಸ್ಥಳೀಯ ಉದ್ಯಮಿಗಳೇ ನಡೆಸುತ್ತಾರೆ. ಬಹುತೇಕ ಬಸ್ಸುಗಳ ಕಿಡಕಿಗಳಿಗೆ ಗ್ಲಾಸ್ಸು ಇರುವುದಿಲ್ಲ. ಮಳೆಯಿಂದ ರಕ್ಷಿಸಿಕೊಳ್ಳಲು ದಪ್ಪನೆಯ ಪರದೆಯನ್ನು ಕಿಡಕಿಗಳಿಗೆ ಕಟ್ಟಲಾಗುತ್ತದೆ. ರಸ್ತೆಗಳು ಕಿರಿದಾಗಿರುವುದರಿಂದ ಬಸ್ಸುಗಳ ಉದ್ದ ಕೂಡ ಕಡಿಮೆ. ಅದರ ಸ್ಪೀಡ್ ಹಾಗೂ ಓವರ್ ಟೇಕಿಂಗ್ ಮಾತ್ರ ಕೆಲವೊಮ್ಮೆ ಅನಾಹುತಕಾರಿ ಎಂದು ನನಗೆ ಅನಿಸಿದೆ.

ಮಳೆಗಾಲದ ಚಳಿಗೆ, ಬೆಳಿಗ್ಗೆಯ ಗಾಳಿ 'ಸಖತ್ ಹೊಟ್ ಮಗಾ' ಎಂಬ ರೇಡಿಯೋ ಮಿರ್ಚಿಯ ವಾಕ್ಯ ಬದಲಿಸಿ 'ಸಖತ್ ಚಳಿ ಮಗಾ' ಅನ್ನುವಷ್ಟು ಖಡಕ್ ಆಗಿತ್ತು. ಈ ಚಳಿ-ಮಳೆಯ ಬಗ್ಗೆ ಯೋಚಿಸುತ್ತಿರುವಾಗ, ಹಾಲು ಹಾಕುವ ಹುಡುಗರು, ಪೇಪರ್ ಹಾಕುವ ಹುಡುಗರು, ಆಫೀಸ್ ಗೆ ಏಳು ಗಂಟೆಯೊಳಗೆ ಬಂದು ಹೌಸ್ ಕೀಪಿಂಗ್ ಮಾಡುವರ ನೆನಪು ನನ್ನ ಮನಸ್ಸಿನಲ್ಲಿ ನಡೆದಾಡಿತು. ಒಂದು ಒಳ್ಳೆಯ ಅಂಗಿ ಕೂಡ ಕೊಂಡು ಕೊಳ್ಳಲಾರದ ಬಡ ಹುಡುಗರು ಈ ಬೆಳಿಗ್ಗೆಯ ಚಳಿಯಲ್ಲಿ ಹೇಗೆ ಪೇಪರ್, ಹಾಲು ಹೋಗುತಾರೋ ದೇವರೇ ಬಲ್ಲ. ನಾವು ಯಾವತ್ತು ಮುಖವು ಕೂಡ ನೋಡಿರುವುದಿಲ್ಲ. ಒಂದೊಮ್ಮೆ ಸಕಾಲಕ್ಕೆ ನಮ್ಮ ಅಗತ್ಯತೆ ಬರದಿದ್ದರೆ ನಾವು ಓದಾರಡಿ ಬಿಟ್ಟಿರುತ್ತೇವೆ. ಆದರೆ, ರಾತ್ರಿಯೆಲ್ಲ ಇಂಟರ್ನೆಟ್ ಕೇಬಲ್ ಗೆ ಜೋತು ಬಿದ್ದು ಬೆಳಿಗ್ಗೆ ಸೂರ್ಯ ಬಂದುದ್ದು ಎಲ್ಲಿಂದ ಎಂದು ತಿಳಿಯಲು ಕೂಡ ಗೂಗಲ್ ಉಪಯೋಗಿಸುವ ಪರಿಸ್ಥಿತಿ ಇಂಜಿನಿಯರಿಂಗ್ ಹುಡುಗರದ್ದು. ನಾವು ಸುಖ ಜೀವಿಗಳೋ ಅಥವಾ ಬೆಳಿಗಿನ ಜಾವದಲ್ಲಿ ಏನು ನಡೆಯುತ್ತದೆ ತಿಳಿಯದ ಅಜ್ಞಾತ ಜೀವಿಗಳೋ ಎನ್ನುವ ಪ್ರಶ್ನೆಗಳು ಮೂಡಿದವು.

ಇಷ್ಟು ಯೋಚಿಸುವಾಗ ಬಸ್ಸು ಮಣಿಪಾಲದಿಂದ ಪರ್ಕಳ ದಾಟಿತ್ತು. ಬಸ್ಸಿನ ಪ್ರತಿ ವಾಲುವಿಕೆಯೂ ನನ್ನ ವಿಚಾರದ ದಾರಿಯನ್ನು ಬದಲಿಸುತ್ತಲಿತ್ತು. ಅದೆಷ್ಟೋ ವಿಚಾರಗಳು-ಬಸ್ಸು ಬಿದ್ದರೆ, ಯಾವ ಮರ, ಯಾವ ಬೋರ್ಡ್ ಹೀಗೆ ಏನೇನೋ ವಿಚಾರಗಳು ತಲೆಯಲ್ಲಿ ನಡೆಯುತ್ತಲೇ ಇರುತ್ತವೆ. ಒಂದೊಮ್ಮೆ ಮನುಷ್ಯನ ತಲೆ ಎಲೆಕ್ಟ್ರಾನಿಕ್ಸ್ ಚಿಪ್ ನಿಂದ ಮಾಡಿದ್ದಾಗಿದ್ದರೆ, ಅದರಿಂದ ಉಂಟಾದ ಬಿಸಿಯನ್ನು ಒಬ್ಬನಿಗೆ ಸ್ನಾನ ಮಾಡಲು ಸಾಕಾಗುವಷ್ಟು ನೀರು ಹದನೈದು ನಿಮಿಷದಲ್ಲಿಯೇ ಕಾಯಿಸಬಹುದೋ ಏನು..!

ದೇವರ ದರ್ಶನಕ್ಕೆ ಹೊರಟಿದ್ದರಿಂದ ದೇವರ ಕುರಿತಾಗಿ ವಿಶೇಷ ದೇವರ ಧ್ಯಾನ ಕೂಡ ಮನಸ್ಸಿನಲ್ಲಿ ಉಂಟಾಗಿತ್ತು.ನಾನು ಅಮ್ಮನ ಆದೇಶದ ಮೇರೆಗೆ ದೇವರ ದರ್ಶನಕ್ಕೆ ತೆರಳುತ್ತಿದ್ದರು ದೇವರಲ್ಲಿ ಏನಾದರು ಬೇಡಿಕೆ ಇಡಬೇಕಲ್ಲವೇ ಅನ್ನುವ ಸಣ್ಣದೊಂದು ಪ್ರಶ್ನೆ ಕೂಡ ಹುಟ್ಟಿಕೊಂಡಿತ್ತು. ಅರೋಗ್ಯ ಇದೆ;ಹಣ ಇದೆ;ಉದ್ಯೋಗ ಇದೆ; ನೆಚ್ಚಿನ ಗೆಳೆಯರಿದ್ದಾರೆ. ಎಲ್ಲವು ಇದೆ ಅಂದುಕೊಳ್ಳುತ್ತಲೇ 'ಒಂದು ಹುಡುಗಿಯನ್ನು ಕೇಳಿದರೆ ತಪ್ಪೇ?' ಎಂದು ಪ್ರಶ್ನಿಸಿ ಕೊಂಡು ಹೇಗೆ ಕೇಳುವುದು ಎಂದು ವಾಕ್ಯಗಳನ್ನು ಸರಿ ಹೊಂದಿಸುತ್ತಲೇ ಸೀಟ್ ಗೆ ಒರಗಿ ಕುಳಿತುಕೊಂಡೆ. ಕಣ್ಣು ಮುಚ್ಚಿದವು. ವಾಕ್ಯಗಳು ದೇವರ ಮುಂದಿಡ ಬಹುದಾದ ಪರಿಪೂರ್ಣ ಬೇಡಿಕೆಯಾಗಿ ಮನಸ್ಸಿನಲ್ಲಿ ನುಸುಳಿದವು. ಭಕ್ತಿಯ ಪರಾಕಾಷ್ಟತೆಯೇಮ್ಬಂತೆ, ದೇವರ ಪರಿ ಸಾನಿಧ್ಯದ ಮುಂದೆ ನಿಂತಂತೆ ಭಾಸವಾಯಿತು.ಆದರೆ, ಮುಂದೇನಾಯಿತು ತಿಳಿಯಲಿಲ್ಲ. ಬಸ್ಸಿನ ವಾಲುವಿಕೆ ಜೋಕಾಲಿಯಾಗಿ, ಮಿತ್ತ ಪೋಲೆ-ದುಂಬ ಪೋಲೆ ಗಳು ಜೋಗುಲಾವಾಗಿ, ಬಸ್ಸಿನ ಸೀಟ್ ತೊಟ್ಟಿಲು ಎಂಬಂತೆ ಸುಖ ನಿದ್ರೆಗೆ ಜಾರಿದೆ.

ಮುಂದಿನ ಭಾಗ -೩.

ಕಂಚಿನ ಕಂಠದ ಸಿಂಚನಾ ಕಾಣಲು
ವಂಚನೆಯಿಲ್ಲದ ಭಾವವ ಜನಿಸಲು
ಕೊಂಚ ನಾಚಿಕೆಯೋಳಂದೆ ' ಇಂಚಿನ ಪೋನ್ನು' ಮಹಾರಾಯರೇ??
ಮಿಂಚಿನ ಕಣ್ಣಗಳು, ಸೂರ್ಯ ತೇಜಸ್ಸು
ಮಂಚದ ಮೇಲಿನ ರಾಣಿಯ ಹಾಗೆ
ಮಿಂಚಿದ ಸಿಂಚನಾ ನೋಡಿ, ಭಕ್ತಿಗಾಯಿತು ವಿರುಕ್ತಿ ಭಾವದ ಸೋಲು .

1 comment: