Monday, August 11, 2014

ಕನಸಿನ ಹುಡುಗಿ -ಸಿಂಚನಾ ::ಭಾಗ-೪(ಪಿರಂಜೆಯಲ್ಲಿ ಸಿಂಚನಾ ಹಿಂದೆ ಹೊದುದ್ದು)

In order to understand the story you need to read previous parts. You can read the earlier parts  in   
-------------------------------------------------------
http://heartwaves4u.blogspot.in/ 
-------------------------------------------------------

ಭಾಗ-೪:
ನಾನು ಪಿರಂಜೆ ಎಂಬ ಊರಿನ ಬಗ್ಗೆಯಾಗಲಿ ಅಥವಾ ಯಾವುದೇ ತುಳು ಭಾಷೆಯ ಪದವಾಗಲಿ ಕೇಳಿದ ನೆನಪಿಲ್ಲ. ನನಗೆ ಗೊತ್ತಿರುವ ಎಲ್ಲ ಯಕ್ಷಗಾನ ದಿಗ್ಗಜರ ಹೆಸರಗಳ ಸುತ್ತ 'ಪಿರಂಜೆ' ಎಂಬ ಶಬ್ದ ಇದೆಯೇ ಎಂದು ಹುಡುಕಾಡಿದೆ. ಯಾವ ಪ್ರಯೋಜನವಾಗಲಿಲ್ಲ. ನನ್ನ ಪಕ್ಕದಲ್ಲಿ ಕುಳಿತ ಅಜ್ಜನಿಗೆ ವಿಷಯ ಕೇಳಬೇಕು ಎಂದು ಮಾತಿನಲ್ಲಿ ತೊಡಗಿದೆ.
' ಇಲ್ಲಿಂದ ಬೆಳ್ತಗಂಗಡಿ ಎಷ್ಟು ದೂರ ಉಂಟು?".
'ಇಲ್ಲಿಂದ ಸುಮಾರು ೨೦ ಮೈಲಿ ದೂರ ಇದೆ' ಎಂದ.
ನಾವೆಲ್ಲ ಹೊಸ ಜಮಾನದ ಹುಡುಗರು. ಅಮೆರಿಕನ್ ಪದ್ಧತಿಯಿಂದ ಪ್ರಭಾವಿತರೆ ಹೊರತು ಬ್ರಿಟನ್ ಮೈಲಿ ನಮಗೆ ಅರ್ಥವಾಗುವುದಿಲ್ಲ. ಆದರೆ ನನಗೆ ಕೆಲಬೇಕಾದುದ್ದು ಬೆಳ್ತಂಗಡಿಯ ದೂರ ಅಲ್ಲ. ಬದಲಾಗಿ 'ಪಿರಂಜೆ' ಒಂದು ಊರೇ? ಅದು ಎಲ್ಲಿದೆ ಅನ್ನುವುದು. ಅದಕ್ಕಾಗಿ ಇದು ಪ್ರಾರಂಭಿಕ ಮಾತು ಮಾತ್ರ. ಮತ್ತೆ ಅವನ ಕಡೆ ತಿರುಗಿ,
'ಮುಂದಿನ ಊರುಗಳು ಯಾವುವು? ಇಲ್ಲಯ ಊರುಗಳು ಚೆನಾಗಿವೆ".
'ತುಂಬಾ  ಊರುಗಳುಂಟು. ಮುಂದಿನದು ಪಿರಂಜೆ. ನೀವು ಎಲ್ಲಿಗೆ ಹೋಗುವುದು ಮಹಾರಾಯರೇ?".  ಎಂದು ಮುದುಕ ಮಾತನಾಡಿದ. ನನ್ನ ಉತ್ತರ ಸಿಕ್ಕಿತು. ಮುದುಕನ ಪ್ರಶ್ನೆಗೆ ಉತ್ತರಿಸಬೇಕೆಂಬ ಕನಿಷ್ಠ ಸೌಜನ್ಯ ನನಗೆ ಉಳಿಯಲಿಲ್ಲ. ನನ್ನ ಹುಡುಗಿಯ ಕುರಿತಾದ ಗಣಿತವೆ ನನ್ನ ಪ್ರಪಂಚ.

ಊರು-ಕೇರಿ-ಪಟ್ಟಣ ಸುತ್ತುವರಿಗೆ ಇಂಥ ದಾರಿಹೊಕರೆ ನಮಗೆ ನಿಜವಾದ ದಾರಿ ತೋರಿಸುವರು.ನಾವೆಲ್ಲಾ 'ಇಂಟರ್ನೆಟ್ ನಿಂದ ಗ್ಲೋಬ್ ಇಸ್  ವಿಲೇಜ್' ಎಂಬ ವಾಕ್ಯವನ್ನು ಹೇಳುತ್ತಾ ಜಿಪಿಎಸ್ ನಲ್ಲಿ ಎಲ್ಲವು ಇರುತ್ತೆ ಎಂದು ಮೊಬೈಲ್ ನ್ನು ಹಿಡಿದು ತಿರುಗುತ್ತಿದ್ದರೂ, ಮತ್ತೆ ಮೊಬೈಲ್ ಸರಿಯಾಗಿ  ತೋರಿಸುತ್ತದೋ ಇಲ್ಲವೋ ಎಂದು ಸಂದೇಹಕ್ಕೆ ಒಳಗಾಗಿ ಇಲ್ಲವೇ, ನಕ್ಷೆ ಹಾಗೂ ಇರುವ ಸ್ಥಿತಿಗಳು ಸಂಬಂಧಗಳೇ ಇರದೇ ದಾರಿಹೋಕರನ್ನು ಆಶ್ರಯಿಸುವುದು ಅನಿವಾರ್ಯವಾಗಿ ಬಿಡುತ್ತದೆ. ಇಂಥ ದಾರಿಹೋಕರು ನಮ್ಮ ತಂತ್ರಜ್ಞಾನಕ್ಕಿಂತಲೂ ಹೆಚ್ಚು  ನಂಬಿಕಾರ್ಹರು. ಕೆಲವೊಮ್ಮೆ ನಾವು 'ಥ್ಯಾಂಕ್ಸ್' ಎಂದು ಹೇಳಲು ಕೂಡ ಮರೆತು ಬಿಡುತ್ತೇವೆ.

ನನಗೆ ಉಳಿದಿರುವ ಸಮಯ ಬಹಳ ಕಡಿಮೆ. ಇಂಜಿನಿಯರಿಂಗ್ ನ  ಪರೀಕ್ಷೆಯ ಕೊನೆಯ 'ಐದು ನಿಮಿಷ ಇದೆ' ಇಂದು ಮೇಲ್ವಿಚಾರಕ ಹೇಳಿದಾಗ, ಉಂಟಾಗುವ ಉದ್ವೇಗ ನನಗಾಗುತ್ತಿದೆ. 'ಲವ್ ಆಟ್ ಫಸ್ಟ್ ಸೈಟ್' ಎಂಬ ನಿಯಮವನ್ನು  ನಿಜವಾಗಿ ಸತ್ಯವೆಂದು ತೋರಿಸಬೇಕಾದ  ಜವಾಬ್ಧಾರಿ ನನ್ನ ಮೇಲಿದೆ. ಇಷ್ಟೊಂದು ಹೊತ್ತು ಬಸ್ಸಿನಲ್ಲಿ  ಹುಡುಗಿಯ  ಮುಖವನ್ನು ನೋಡುತ್ತಾ, ರೋಮಾಂಚನ ಗೊಂಡಿರುವ ನಾನು ಮುಂದೇನು ಎಂದು ಯೋಚಿಸದೆ ಹೋದರೆ, ಅರ್ಜಿಯಯೊಂದನ್ನು ಬರೆದು ಸಹಿ ಮಾಡದ ಹಾಗಾಗುವುದಿಲ್ಲವೇ? ದೇವರು ಕೊಟ್ಟರೂ, ಸ್ವೀಕರಿಸುವ ಮನಸ್ಥಿತಿಯಿಲ್ಲದ ದರಿದ್ರ ನಾರಾಯಣ ನಾನಗುವುದಿಲ್ಲವೇ? ಮುಂದಿಂಗ ಜನಾಂಗಕ್ಕೆ 'ಪ್ರೀತಿಯಲ್ಲಿ ಬಿಳುವುದಕ್ಕೆ ಬಸ್ಸಾದರೂ ಅದೀತು' ಎಂಬ ಸಂದೇಶವನ್ನು ನನ್ನಿಂದ ಸಾಧ್ಯವಾಗುವ ಅವಕಾಶ ಬಂದಿರುವಾಗ ಕಳೆದುಕೊಳ್ಳಬೇಕೆ ? ಸಾವಿರಾರು ಪ್ರಶ್ನೆಗಳು! ಒಮ್ಮೆ ಹುಡುಗಿ ಇಳಿದು ಹೋದಳೆಂದರೆ ನನ್ನ ಮುಂದೆ ಇರುವುದು ಕೇವಲ ಅವಳು ಕುಳಿತ ಸೀಟ್ ಹಾಗೂ ಮನದ ಆಳದಲ್ಲಿ ಇವರೆಗೆ ನಾನು ಒತ್ತಿಕೊಂಡ ಅವಳ ಚಿತ್ರಣ ಮಾತ್ರ.

ಹೋಗಿ ಮಾತನಾಡಿಸಲೇ? ದಾರಿ ಹೋಕನ ಮುಖವನ್ನು ನೋಡದ ಸಭ್ಯ ಹುಡುಗಿ ನನ್ನನ್ನು ಎಂದು ತಿಳಿದಾಳು? ಸಮಾಜದ ಮಧ್ಯೆ  ಯಾರೆಂದು ಗೊತ್ತೇ ಇರದವಳ ಮುಂದೆ ಹೇಗೆ ನಿಲ್ಲಲಿ ? ಏನು ಹೇಳಲಿ ? ಧೈರ್ಯವಾದರೂ ಇರಬೇಕಲ್ಲ? ಪ್ರೀತಿಯಂದರೆ  ನಾನೇನು ಸೌಂದರ್ಯ ಕಂಡೆ ಎಂದು ತಲೆ ತಗ್ಗಿಸಿ 'ಆಯ್ ಲವ್ ಯು' ಎಂದು ಬಾಯಿ ಕಿಸಿಯುವ  ಮಂತ್ರವೇ ? ಇಂಥ ಸಂದರ್ಭವೊಂದು ನನ್ನ ಜೀವನದಲ್ಲಿ ಬರುವುದು ಎಂದು ನಾನು ಯಾವ ಪೂರ್ವ ನಿರೀಕ್ಷೆಯನ್ನು ಇಟ್ಟುಕೊಂಡಿರಲಿಲ್ಲ. ನೂರಾರು ರೀತಿಯಲ್ಲಿ ಆಲೋಚಿಸುವಾಗಲೇ, ಹಿಂದಿನ ಡೋರ್ ನಿಂದ "ಪಿರಂಜೆ" ಎಂದು ಕ್ಲೀನರ್  ಒದರಿ ಬಿಟ್ಟ.  ಹುಡುಗಿಯರು ಇಳಿಯಲಾರಂಭಿಸಿದರು. ನಾನು  ಮುಂದಿನ ಸೀಟ್ ನಿಂದ, ಜನಗಳನ್ನು ದೂರು ಸರಿಸುತ್ತ ಹಿಂದಿನ ಬಾಗಿಲಿಗೆ ಬಂದೆ. "ನೀವು ಬೆಳ್ತಂಗಡಿಗೆಯಲ್ವಾ? " ಎಂದು ಕ್ಲೀನರ್ ಹೇಳುತಿದ್ದರು ಇಳಿದು ಬಿಟ್ಟೆ. ನಾನು ಅವನಿಗೂ ಉತ್ತರಿಸಲಿಲ್ಲ. ನೂರಾರು ರುಪಾಯಿ ಕೊಟ್ಟು ಟಿಕೆಟ್ ತಗೆಸಿದ ನಾನು ತಲೆ ಕೆಡಿಸಿಕೊಂದಿರದಿದ್ದರು, ಟಿಕೆಟ್ ಕೊಟ್ಟ ಆತನಿಗೆ ನಾನು ಸೇರಬೇಕಾದ ಜಾಗಕ್ಕೆ ಸೇರಿಸಬೇಕಾದ ಜವಾಬ್ಧಾರಿಯಿತ್ತು.

ಇಳಿದ ಮೇಲೆ, ಇಬ್ಬರು ಹುಡುಗಿರಯರು ಛತ್ರಿಗಳನ್ನು ಹಿಡಿದು ತಮ್ಮದೇ ಲೋಕದ ಸಂಭಾಷಣೆಯಲ್ಲಿ ಪೋಸ್ಟ್ ಆಫೀಸ್ ಹತಿರದ ರಸ್ತೆಯಲ್ಲಿ ಸಾಗುತಿದ್ದರು. ಮೊದಲು ಪಿರಂಜೆಯಲ್ಲಿ ಇಳಿಯಲು ಹುಡುಗಿಯರು ಕಾರಣವಾಗಿದ್ದರು, ಇಳಿದ ಮೇಲೆ ಏನು ಉದೇಶ ಇರಲಿಲ್ಲ. ಚಂದ್ರನ ಮೇಲೆ ಇಳಿದ ನಿರ್ಲ ಆರ್ಮ್ ಸ್ಟ್ರಾಂಗ್ ನಿಗೂ ಚಂದ್ರನ ಮೇಲೆ ಇಳಿದ ಮೇಲೆ ನನ್ನ ಹಾಗೆ 'ಏನು' ಎನ್ನುವ ಪ್ರಶ್ನೆ ಕಾಡಿಯೇ ಇರಬೇಕು. ಹೀಗೆ ಯೋಚಿಸುತ್ತಲೇ ದೂರದಿಂದಲೇ ಅವರ ನಿರ್ಗಮನವನ್ನು ಅತ್ಯಂತ ಕಹಿ ಮನಸ್ಸಿನಿಂದ ನಿಂತು ನೋಡುತ್ತಾ ನಿಂತೇ. ಅವರೊಮ್ಮೆ ಸೂರ್ಯಾಸ್ತದ ಹಾಗೆ ತಿರುವಿನ ರಸ್ತೆಯಲ್ಲಿ ಮರೆಯಾದ ಹಾಗೆ ನಾನು ಹಿಂಬಾಲಿಸ ತೊಡಗಿದೆ. ಅದಾವ ಉದ್ದೇಶ ನನಗಿತ್ತೋ ಗೊತ್ತಿಲ್ಲ. ಹೀಗೆ ಅವರನ್ನು ಹಿಂಬಾಲಿಸುವ ಉದ್ದೇಶ ನನ್ನ ಮನಸ್ಸಿನ ನಿರ್ಧಾರವಲ್ಲ. ಅಲ್ಲಿ 'ಏನು ಮಾಡ್ಬೇಕು'  ಪ್ರಶ್ನೆಗೆ ಕಾಣದ ಸಾವಿರಾರು ಬಗೆಯ ಯೋಚನೆಗಳು ನನ್ನ ಭೌತಿಕ ದೇಹವನ್ನು ಅವರನ್ನು ಹಿಂಬಾಲಿಸುವಂತೆ ಪಿಡಿಸಿತು. ಹಾಗೆ ಸಾಗುವಾಗ, ಒಂದು ಸುಂದರ ಮನೆಯನ್ನು  ಪ್ರವೇಶ ಮಾಡಿದರು. ಅವರು ನನ್ನ ನೋಡಿಲ್ಲ.

ನಾನು ಪಿರೆಂಜೆಗೆ ಅನಗತ್ಯವಾಗಿ ಬಂದಿರುವುದು ಆ ಬಸ್ಸಿನ ಕ್ಲೀನರ್ ಗೆ ಗೊತ್ತು ಹಾಗೂ ಅಲ್ಲಿದ ನಿಸರ್ಗದತ್ತ ಮರ ಗಿಡಗಳಿಗೆ ಗೊತ್ತಿರಬೇಕು. ಹುಡುಗಿಯರು ಮರೆಯಾಗಿ ಮನೆಯನ್ನು ಸೇರಿದ ಮೇಲೆ ನನ್ನ ಬಳಿ ಏನು ಉಳಿದಿಲ್ಲ. ಕಿಸಿಗೆ ಕೈ ಹಾಗಿದಾಗ, ನೂರಾರು ರುಪಾಯಿ ಟಿಕೆಟ್ ಹಾಲು ಮಾಡಿರುವುದು ಗಮನಕ್ಕೆ ಬಂತು. ಆದರೆ, ಸಂಸ್ಕೃತಿಯೆಂಬ ಪದಕ್ಕೆ, ಸೌಂದರ್ಯ ಎಂಬ ಪದಕ್ಕೆ ವಿರುದ್ಧವಾಗಿರುವ  ಸಿನೆಮಾದ ಹುಡುಗಿಯರ ಅರಬತ್ತಲೇ ಡಾನ್ಸ್ ನ್ನು ಸಿನೆಮಾಗಳಲ್ಲಿ ನೋಡಲು ನಾವು ನೂರಾರು ರುಪಾಯಿ ತೆತ್ತುವಾಗ, ನಮ್ಮ ಸಂಸ್ಕೃತಿಯ, ಸೌಂದರ್ಯದ ಚಿಲುಮೆಯನ್ನು ನೋಡಲು ನಾನು ದುಡ್ಡು ಕಳೆದುಕೊಂಡುದ್ದರಲ್ಲಿ  ಏನು ಮಹಾ..! ಎಂದು ಸಮಾಧಾನಿಸಿಕೊಂಡೆ. ದೇವರನ್ನು ಕಾಣಲು ಬಂದ ನಾನು, ವಿಶ್ವಾಮಿತ್ರನ ಹಾಗೆ, ಹೆಣ್ಣಿನತ್ತ  ಆಕರ್ಷಿತನಾಗಿ ಮೂಲೋದ್ದೇಶ ಮರೆತುದ್ದು ನೋವು ತರಿಸಿತು. ರಸ್ತೆಯಲ್ಲಿ, ಚಪ್ಪಲಿ ಎಸೆದು ಕಣ್ಣು ಮುಚ್ಚಿ ದೇವರಿಗೆ 'ದೇವರೇ ಕ್ಷಮಿಸು' ಎಂದು ಬೇಡಿಕೆ ಇಟ್ಟೆ. ಮತ್ತೆ, ಬಸ್ಸು ಇಳಿದ ಸ್ಥಳಕ್ಕೆ ಬಂದು, ಧರ್ಮಸ್ಥಳದ ಬಸ್ಸಿಗೆ ಕಾಯುತ್ತ ನಿಂತೇ.


ಮುಂದಿನ ಭಾಗ:೫ ರಲ್ಲಿ  ಮುಂದಿನ ಕತೆ ನಿರೀಕ್ಷಿಸಿ.

No comments:

Post a Comment