Thursday, August 7, 2014

ಕನಸಿನ ಹುಡುಗಿ -ಸಿಂಚನಾ ::ಭಾಗ-೧ (ಮಣಿಪಾಲದಲ್ಲಿ ಬಸ್ಸು ಹತ್ತಿದ್ದು)

ಕತೆಯ ಕಾಲ-2010. ಈ ಸಮಯದಲ್ಲಿ ನಾನು ಮಣಿಪಾಲದಲ್ಲಿ ನಾನು ಕೆಲಸದಲ್ಲಿದ್ದೆ.
ನನಗೆ ೨೫೦ ಜನ ಸಹೋದ್ಯೋಗಿಗಳು, ಅದರಲ್ಲಿ ೭೦ ಜನ ನನ್ನ ಜೂನಿಯರ್ ಗಳು ಇದ್ದರು. ಈ ಕತೆ ನನ್ನ ಸುತ್ತಲೇ ಕಟ್ಟಿದ್ದೇನೆ. ಯಾವುದೇ ವ್ಯಕ್ತಿಯ ಬದುಕನ್ನು, ಅಥವಾ ಹಿಂದಿನ ನನ್ನ ಕಂಪನಿಯ ಯಾವುದೇ ವಿಷಯವನ್ನು ನಾನು ಬಳೆಸುತ್ತಿಲ್ಲ.


ಭಾಗ-೧ :

ಶ್ರಾವಣ ಮಾಸ. ಹಬ್ಬಗಳ ಆರಂಭದ ದಿನಗಳು. ಮಣಿಪಾಲದಲ್ಲಿ ಭಾರಿ ಮಳೆಯೂ ಪ್ರಾರಂಭವಾಗಿ ಹಲವು ದಿನಗಳು ಕಳೆದಿದ್ದವು .

ಮಣಿಪಾಲದಲ್ಲಿ ಮಳೆ ಅಂದರೆ ಮೂರೂ ನಾಲ್ಕು ತಿಂಗಳು ಗೃಹ ಬಂಧನ ಇದ್ದಹಾಗೆ. ಎಷ್ಟು ಹೊತ್ತಿಗೆ 'ಎಂಥಾ' ಮಳೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಒಂದೇ ಕ್ಷಣ ಮಾತ್ರದಲ್ಲಿ ರಸ್ತೆ, ಕಾಲುವೆ, ಹಳ್ಳಗಳು ತುಂಬಿ ಹೋಗುತ್ತವೆ.ರಭಸದಿಂದ ಗಾಳಿ ಬೀಸುತ್ತದೆ. ಛತ್ರಿ ಗಟ್ಟಿಯಾಗಿದ್ದರೆ ಮಾತ್ರ ಗಾಳಿಗೆ-ಮಳೆಗೆ ನಿಮ್ಮ ರಕ್ಷಿಸೀತು! ಆದರೆ ಒಮ್ಮೆ ಮಳೆ ನಿಂತಿದೆಯಂದರೆ ಎಲ್ಲವು ಸ್ವಚ್ಚ. ಇರು ಇಲ್ಲ; ಗಾಳಿಯು ಇಲ್ಲ. ನಿರಾಳವಾಗಿ ಹೆಜ್ಜೆ ಹಾಕ ಬಹುದು. ಒಂದೊಮ್ಮೆ ಮಣಿಪಾಲದ ಹಾಗೆ ಹುಬ್ಬಳಿಯಲ್ಲೆನಾದರು ಮಳೆ ಬಿದ್ದರೆ ಹತ್ತು ವರ್ಷ ಹುಬ್ಬಳಿ ನೀರಿನ ಕೆರೆಯೇ ಆಗಿ ಬಿಡಬಹುದು. ಮಳೆ ಆರಂಭವಾಗುತ್ತಿದ್ದನತೆ ಎಲ್ಲವು ಹಸಿರು. ಸುತ್ತಲು ಗಿಡ-ಪೊದೆಗಳು ಹಬ್ಬಿ ಎಲ್ಲವು 'ಗ್ರೀನ್ ವ್ಯೂ' ಅಥವಾ ಎಸಿ ರೂಂ ನಲ್ಲಿ ಕೊಳೆಯುತ್ತಿದವರಿಗೆ 'ನ್ಯಾಚುರಲ್ ಸೀನ್'.

ಮಣಿಪಾಲಕ್ಕೆ ಹೊರಗಿನಿಂದ ಬಂದವರಿಗೆ ಮಣಿಪಾಲದ ಮಳೆ ಒಂದು ರೀತಿಯ ಶಾಪ. ಅದರಲ್ಲೂ ಉತ್ತರ ಕರ್ನಾಟಕದ ಯಾವುದೊ ಪ್ರದೇಶದಲ್ಲಿ ಮಣಿಪಾಲದಲ್ಲಿ ಬೇಸಿಗೆಯಲ್ಲಿ ಬೀಳುವ ಇಬ್ಬನಿಯಷ್ಟು ಮಳೆಯನ್ನೂ ನೋಡಿದವರಿಗೆ ಮಣಿಪಾಲದಲ್ಲಿ ಅವರಿಗೆ ಪ್ರವಾಹ ಅನಿಸುವುದು ಸಹಜವಾಗಿತ್ತು. ಯಾರಿಗಾದರು ಹೊರಗಡೆ ಹೋಗೋಣ ಅಂದರೆ, " ಸಾಕಲೇ...ಈ ಮಳೆ ಕೊಲ್ತಾ ಇದೆ ಲೇ " ಎಂದು ಕೊರಗುತ್ತಲೇ ಕಚೇರಿಯತ್ತ ತೆರಳುವರೆ ಜಾಸ್ತಿ. 'ಇಂಚಿನ ಸಾವು ಮಹರಾಯ !'.

ಅದು ಶ್ರಾವಣ ಮಾಸದ ಮೊದಲ ಶುಕ್ರವಾರ. "ವೀಕೆಂಡ್ ಪ್ಲಾನ್ ?" ಎನ್ನುತ್ತಲೇ ಎಲ್ಲರು ಕೇಳುತ್ತಲಿದ್ದರು. ಎಲ್ಲರು ಒಂದೊಂದು ಸಬೂಬು. ಮಳೆ ಬೇರೆ. ಹೀಗಿರುವಾಗ ನಾನು ಧರ್ಮಸ್ಥಳಕ್ಕೆ ಹೋಗಬೇಕು, ಶ್ರಾವಣ ಮಾಸದ ಪೂಜೆ ಸಲ್ಲಿಸಬೇಕು ಎಂದು ನನ್ನ ಮನೆಯಿಂದ ಆದೇಶ ಬಂತು. ಶನಿವಾರ ಬೆಳಿಗ್ಗೆ ನಾನು ಧರ್ಮಸ್ತಳಕ್ಕೆ ತೆರಳಲು ನಾನು ನಿರ್ಧಾರ ಮಾಡಿ, ಬದುಕಿನ ಏಕಾಂಗಿತನದ ಜೊತೆಯಲ್ಲೂ ನನ್ನ ಜೊತೆಯಿದ್ದ ಗೆಳತಿ ಆಕಾಶವಾಣಿ ಯನ್ನು ಕೇಳುತ್ತ, ಉಡುಪಿಯ ಬಗ್ಗೆ ಕನಸುಗಳನ್ನು ಕಾಣುತ್ತ, ಭರತನಾಟ್ಯ, ಸಂಗೀತ, ರಾಜಾಂಗಣ, ಯಕ್ಷಗಾನ, ಆಭರಣ, ಡಯಾನಾ ಚಿತ್ರಗಳನ್ನು ಕಾಣುತ್ತ ಮಲಗಿದ್ದೆ. ಕೆಲವೊಮ್ಮೆ ಮಳೆಯ ತಪ-ತಪ ಎನ್ನುವ ಹನಿಗಳ ಸದ್ದು , ಗಡಿಯಾರದ ಟಿಕ್ ಟಿಕ್ ಶಬ್ಧವು ಕೂಡ ನನ್ನ ಕನಸ್ಸಿಗ್ಗೆ ತೊಂದರರೆ ಕೊಡುತ್ತಿತ್ತು. ಎಲ್ಲವು ಕನಸಿನೊಳಗೆ ಕನಸಾಗಿ, ನಿದ್ದೆಯೇ ಮುಗಿಯದ ಕಾಲದಲ್ಲಿ ಬೆಳಿಗ್ಗೆ ೬ ಗಂಟೆಗೆ ಅಲರಾಮ ನನ್ನ ಏಳಿಸಿತು...!

ತಣ್ಣೀರಿನ ಸ್ನಾನ ಮಾಡಿ, ಬೆಳಿಗ್ಗಿನ ಜಾವದಲ್ಲಿ ಟೈಗರ್ ಸರ್ಕಲ್(ಹುಲಿ ವೃತ್ತ) ಕ್ಕೆ ಬಂದೆ. ದೇವರ ದರ್ಶನಕ್ಕೆ ಹೊರಟಾಗ ದೇವರ ಭಕ್ತಿ ರೋಮ-ರೋಮ ಗಳಲ್ಲೂ ಸಂಚರಿಸುತ್ತಿತ್ತು. ಬೆಳಿಗಿನ ಜಾವದಲ್ಲಿ ಯಾವ ಹುಡುಗಿಯು ವೃತ್ತದಲ್ಲಿ ಇದ್ದಿರಲಿಲ್ಲ, ಜೊತೆಗೆ ದೇವಲಾಯಕ್ಕೆ ಹೋಗುವಾಗ ಯಾರನ್ನು ನೋಡಬಾರದು ಎಂದು ಕೊಂಡೆ ಬಸ್ಸಿಗೆ ಕಾಯುತ್ತ ಬಸ್ ಸ್ಟಾಂಡ್ ನಲ್ಲಿ ನಿಂತು ಕೊಂಡೆ. ಮಳೆಯ ಮಧ್ಯೆ, ಬೆಳಿಗಿನ ಛಳಿಯ ಕಾಟದಿಂದ ಮೈ ಮನಸ್ಸು ನಡುಕುತ್ತಲಿತ್ತು.

ಸೋಮೆಂದ್ರ( ನನ್ನ ಕಿರಿಯ ಸಹೋದ್ಯೋಗಿ ) KMC ಯ ಯೋಗ ತರಬೇತಿ ಮುಗಿಸಿ, ಹಂಗ್ಯೋ ಸೈಬಾ(ಹೋಟೆಲ್) ಮುಂದೆ ಹಾಸಿ ನನ್ನ ಮುಂದೆ ನಿಂತು,

"ಹಾಯ್ ಗುಡ್ ಮಾರ್ನಿಂಗ್ ವೆಂಕಟ್ ಸರ್, ಏನು ಇಷ್ಟು ಬೆಳಿಗ್ಗೆ ?? "

"ಏನಿಲ್ಲಪ್ಪ ಸೋಮೆಂದು... ಧರ್ಮಸ್ಥಳ ಕಡೆಗೆ ಹೊರೆತಿದ್ದೇನೆ. ನೀನೇನು ಇಲ್ಲಿ ?" ಎಂದು ಪ್ರಶ್ನಿಸಿ. ಅವನ ಹಿಂದೆ ನಿಂತ ಪಡೆಯಲ್ಲಿ, ರೋಶನ್, ದಿವ್ಯ , ಶ್ರಾವ್ಯ, ಕಂಚಿಕಾ, ರೋಶನಿ...ಎಲ್ಲರನ್ನು ನೋಡಿ. ಅಂತು ದೇವರ ದರ್ಶನದಲ್ಲೂ ಸೌಂದರ್ಯದ ಪಿಂಡಗಳು ಮುಂದೆ ಬಂದವಲ್ಲ; ನನ್ನ ಭಕ್ತಿ ಮಾರ್ಗಕ್ಕೆ ತಡೆ ಅಂದು ಕೊಂಡೆ. ಜೊತೆಗೆ, ಸೂರ್ಯೋದಯವನ್ನು ಎಂದು ನೋಡಿಯೇ ಇರಲಾರದ ಸೋಮೆಂದು ನಂತಹ ಪಿಂಡ ಮಳೆಗಾಲದ ಚಳಿಯಲ್ಲಿ ಯೋಗವೆಂದು ೫ ಗಂಟೆಗೆ ಎದ್ದು ಬರುತ್ತಾನೆ ಎಂದರೆ ಹೆಣ್ಣು ಉತ್ಸಾಹದ ಮೂರ್ತಿಯೇ ಇರಬೇಕು ಅನ್ನುವುದು ಕಂಚಿಕಾಳ ಮುಖ ಒಮ್ಮೆ ನೋಡಿದಾಗಲೇ ನನಗೆ ಅನಿಸಿತ್ತು. ಇವರಿಂದಾಗಿ ಯೋಗದ ಬಗ್ಗೆ ನನಗೂ ಆಸಕ್ತಿ ಹುಟ್ಟಿತ್ತು. ಆದರೆ ಇವರಲ್ಲಿ ನೋಡಿದ ಮುಖ ಯಾವುದು ಕೂಡ ಉಡುಪಿಯದಲ್ಲ; ಕರಾವಳಿಯದಲ್ಲ. ನನ್ನ ಗುರಿ ಏನಿದ್ದರು ಉಡುಪಿ. ನೋ ಯೋಗ..! ಎಂದು ಸಮಾಧಾನಿಸಿ ಕೊಂಡು, ಕಣ್ಣುಗಳನ್ನು ಬಸ್ಸಿನ ಅಗಮನದತ್ತ ನೋಡಿದೆ.
"ಬೈ ಸರ್" ಎನುತ್ತಲೆ ಎಲ್ಲರು ಹೊರಟರು. ನೋಡ ಬಾರದು ಅಂದುಕೊಂಡರು ಮತ್ತೆ ಅವರತ್ತ ನೋಡಿದೆ. ನಾವು ಏನೇ ಮಾಡಿದರು ಹುಡುಗರೇ ಬಿಡಿ!

ಬಸ್ಸು ಬಂತು. ಕರ್ಕರ (ಕಾರ್ಕಳ), ಬಿದ್ರೆ( ಮೂಡುಬಿದರೆ), ಬೆಳ್ತಂಗಡಿ ಎನ್ನುತ್ತಾ ವಾಹನ ಸಹಾಯಕ ಕೂಗಿದ ಧ್ವನಿ ಕೇಳಿ ಬಸ್ಸು ಏರಿ ಕುಳಿತೆ. (ಭಾಗ -೨ ರಲ್ಲಿ ಮುಂದಿನ ಕತೆ ಇದೆ)

No comments:

Post a Comment